Posts

Showing posts from July, 2024

ನಿಮ್ಮ ಮನಸ್ಸನ್ನು ಶುದ್ಧಗೊಳಿಸಲು ಈ ಆರು ವಿಧಾನಗಳು

Image
ಯಾವ ವ್ಯಕ್ತಿ ಅಥವಾ ಒಂದು ಗುಂಪು ನಿಮಗೆ ಕೊಡಬೇಕಾದ ಮರ್ಯಾದೆ ಅಥವಾ ಮಾತನಾಡುವ ಅಧಿಕಾರ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಕೊಡುವುದಿಲ್ಲವೋ ಆ ಗುಂಪಿನಿಂದ ಹೊರಗಿರೋದೇ ಒಳ್ಳೇದು.  ಜೀವನ ಅಂದ್ರೆ ಇಷ್ಟೇ. ಹರಿದ ಚಪ್ಪಲಿಗಾದರೂ ಮನೆಯಲ್ಲಿ ಜಾಗ ಇರುತ್ತೆ. ಆದರೆ ಮನುಷ್ಯ ಸತ್ತರೆ ಮನೆಯಲ್ಲಿ ಜಾಗ ಇರೋಲ್ಲ.  ಮನೆಯಿಂದ ಹೊರಗಡೆ ಇಡ್ತಾರೆ. ಇದು ನಮ್ಮ ಜೀವನ ಸುಖ ದುಃಖಗಳಿಗೆ ನಾವೇ ಹೊಣೆ. ಇಲ್ಲಿ ಯಾರೂ ಕಾಪಾಡಲು ಬರೋದಿಲ್ಲ.   ದಾಹವೆಂದು ನೀರು ಕೇಳಿದವನ ಜೀವ ಉಳಿಸದೆ ಶವಕ್ಕೆ ಅಮೃತ ಸುರಿದರೇನು ಫಲ. ತಂದೆ ತಾಯಿಯ ಸೇವೆ ಮಾಡದೇ ನಿತ್ಯ ದೇವರ ಪೂಜೆ ಮಾಡಿದರೇನು ಫಲ.  ಕಹಿಯಾದರೂ ಸತ್ಯವಾದ ಪ್ರಕೃತಿಯ ಮೂರು ನಿಯಮಗಳು  ಪ್ರಕೃತಿಯ ಮೊದಲ ನಿಯಮ  ಹೇಗೆ ಗದ್ದೆಯಲ್ಲಿ ಬೀಜ ಹಾಕಿಲ್ಲವೆಂದರೆ ಅಲ್ಲಿ ಹುಲ್ಲುಕಡ್ಡಿ ಬೆಳೆಯುತ್ತೋ ಹಾಗೆ ಬುದ್ದಿಯಲ್ಲಿ ಸಕಾರಾತ್ಮಕ ವಿಚಾರಗಳು ತುಂಬಿಲ್ಲವೆಂದರೆ ನಕಾರಾತ್ಮಕ ವಿಚಾರಗಳು ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ.  ಪ್ರಕೃತಿಯ ಎರಡನೇ ನಿಯಮ : ಯಾರ ಬಳಿ ಏನಿರುತ್ತದೋ ಅದನ್ನೇ ಇತರರಿಗೆ ನೀಡುತ್ತಾರೆ. ಸುಖಿ ಸುಖವನ್ನು ಹಂಚುತ್ತಾನೆ. ದುಃಖೀ ದುಃಖವನ್ನು ಹಂಚುತ್ತಾನೆ. ಜ್ನ್ಯಾನಿ ಜ್ನ್ಯಾನವನ್ನು ಹಂಚುತ್ತಾನೆ. ಭ್ರಮಿತ ಭ್ರಮೆಯನ್ನು ಹಂಚುತ್ತಾನೆ. ಭಯ ಬೀತಾ ಭಯವನ್ನು ಹಂಚುತ್ತಾನೆ.  ಪ್ರಕೃತಿಯ ಮೂರನೇ ನಿಯಮ  ತಮಗೆ ಜೀವನದಿಂದ ಏನೆಲ್ಲಾ ಸಿಕ್...

ನೆನಪಿರಲಿ ಕಾಲ ಯಾರಿಗೂ ಕಾಯಲ್ಲ.

Image
ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ. ತನಗೆ ತಾನೇ ಸುಳ್ಳುಹೇಳುವವನಿಂದ ಯಾವ ಅಪೇಕ್ಷೆ ಇಡಬಹುದು?  ಸಲಹೆ ಕೊಡೋರೆಲ್ಲಾ ಸಹಾಯ ಮಾಡಲ್ಲ. ಕನಿಕರ ತೋರ್ಸೋರೆಲ್ಲ ಕಷ್ಟಕ್ಕಾಗಲ್ಲ. ಯಾರಿಗೆ ಯಾರೂ ಇಲ್ಲ.  ನೆನಪಿರಲಿ ಕಾಲ ಯಾರಿಗೂ ಕಾಯಲ್ಲ. ಸಮಯ ಇವತು ಅವರದಾಗಿದ್ರೆ ನಾಳೆ ನಮ್ಮದಾಗುತ್ತೆ. ತಾಳ್ಮೆ ಇರ್ಬೇಕು ಅಷ್ಟೇ. ಕ್ರೋದ ಬುದ್ದಿಯನ್ನು ತಿಂತದೆ. ಅಹಂಕಾರ ಜ್ನ್ಯಾನವನ್ನು ತಿಂತದೆ. ಪ್ರಾಯಶ್ಚಿತ್ತ ಪಾಪವನ್ನು ತಿಂತದೆ. ಮೋಹ ಮರ್ಯಾದೆಯನ್ನು ತಿಂತದೆ. ಲಂಚ ಗೌರವವನ್ನು ತಿಂತದೆ. ಚಿಂತೆ ಆಯುಷವನ್ನೇ ತಿಂತದೆ.  ಬೇರೆಯವರನ್ನ ಕೆಟ್ಟವರು ಅನ್ನೋ ಬಿಂಬಿಸುವ ಪ್ರಯತ್ನ ನೀ ಮಾಡಿದರೆ ಮೊದಲು ಕೆಟ್ಟದಾಗಿ ಕಾಣೋದು ನೀನೆ..... ಕೆನ್ನೆಗೆ ಹೊಡೆದರೆ ಕ್ಷಮೆ ಇದೆ, ಬೆನ್ನಿಗೆ ಹೊಡೆದರೆ ಕ್ಷಮೆ ಇದೆ, ಆದರೆ ಇನ್ನೊಬ್ಬರ  ಹೊಟ್ಟೆಗೆ ಹೊಡೆದರೆ ಯಾವ ದೇವರು ಕೂಡ ಕ್ಷಮಿಸಲ್ಲ. ಭಾವನೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರ.....  ಕಳೆದುಕೊಳ್ಳಲು ಇಷ್ಟವಿಲ್ಲವೆಂದರೆ ಸಹಿಸಿ ಕೊಳ್ಳೋ ಮನಸು ಇರ್ಬೇಕು. ಆಗ ಯಾವ ಸಂಬಂಧವು ದೂರ ಆಗಲ್ಲ. ಅಪ್ಪನ ಫೋಟೋ ಸ್ಟೇಟಸ್ ಹಾಕೋದು ದೊಡ್ಡತನವಲ್ಲ. ಅಪ್ಪನ ಸ್ಟೇಟಸ್ ಗೆ ಯಾವುದೇ ದಕ್ಕೆ ಆಗದಂತೆ ನೋಡಿಕೊಳ್ಳೋದು ಬಹಳ ಮುಖ್ಯ.  ಅತಿಯಾಗಿ ಯಾರನ್ನು ತಿದ್ದಲು ಹೋಗ್ಬಾರ್ದು ಹಾಳೆಯ ಮೇಲೆ ಅಕ್ಷರ ತಿದ್ದಿದಷ್ಟು...

ಕೈ ಗಳು ಇಲ್ಲದವನಿಗೂ ಅದೃಷ್ಟ ಅನ್ನೋದು ಖಂಡಿತ ಇದೆ

Image
ಯಾರನ್ನೋ ಮೆಚ್ಚಿಸ್ಲಿಕ್ಕೆ ನಾವು ಬದುಕಬೇಕಾ ಅಥವಾ ಪ್ರಯತ್ನ ಪಡಬೇಕಾ ? ಏನಂತೀರಾ ?  ಈ ಪ್ರಯತ್ನದಲ್ಲಿ ನಾವು ನಮ್ಮನ್ನೇ  ಹಾಗು    ನಮ್ಮ ಜೀವನದ ಬಹಳಷ್ಟು ಒಳ್ಳೆಯ ಕ್ಷಣಗಳನ್ನು ಕಳೆದುಕೊಳ್ತೀವಿ.   ಈ ಪ್ರಪಂಚಕ್ಕೆ ತೋರಿಸ್ತಿನಿ ಅದ್ಕೊಸ್ಕರ ಸಾಧಿಸ್ತಿನಿ ಅನ್ನೋ ಗ್ಯಾಪ್ನಲ್ಲಿ ನಾವು ನಿಜವಾಗಲೂ ಸಾಧಿಸಬೇಕಾದ ಕೆಲಸಗಳು ಮರೆಯಾಗುತ್ತವೆ. ಸಾದಿಸಿದ ನಂತರ ನೋಡಿ,,,,, ನಾನು ಮಾಡಿದೆ,,,, ಸಾಧಿಸಿದೆ ಎಂದು ಹಾರಾಡೋ ಹೊತ್ತಿಗೆ,,,,,, ನಾವು ಯಾರಿಗೆ ತೋರಿಸ್ಬೇಕು ಅಂತ ಸಾಧನೆ ಮಾಡಿದಿವೊ,,,,,,,,,,,,, ಅವರಿಗೆ ನಮ್ಮ ಸಾಧನೆಯಿಂದ ಯಾವ ವ್ಯತ್ಯಾಸವು ಆಗದು.  ಇನ್ನೊಬ್ಬರಿಗೆ ಮೆಚ್ಚಿಸಲು ನಾವು ಜೀವಿಸುವುದು ತಪ್ಪು. ನಾವು ಮಾಡುವ ಯಾವ ಸಾಧನೆಯಿಂದ ಯಾರಿಗೆ ಎಳ್ಳಷ್ಟ್ಟು ವ್ಯತ್ಯಾಸ ಆಗೊಲ್ವೋ,,,,,, ಅವರಿಗೆ ಸಮಜಾಯಿಸಲು ಜೀವನ ಪೂರ್ತಿ ವ್ಯರ್ಥ ಪ್ರಯತ್ನ ಬಿಟ್ಟು ಬಿಡಿ.  ಬಹಳಷ್ಟು ಇದೆ ಜೀವನದಲ್ಲಿ ಸಾದಿಸಲು.  ಸಾಧನೆ ಎಂದ ಮಾತ್ರಕ್ಕೆ ದುಡ್ಡಿನ ಸಂಪಾದನೆಯಷ್ಟೇ ಅಲ್ಲ. ಈ ಪ್ರಪಂಚಕ್ಕೆ ನಾವು ಕೊಡಬೇಕಾದುದು ಬಹಳ ಇದೆ. ಬದುಕು ನಿದಾನವಾಗಿ ಪಾಠ ಕಲಿಸುತ್ತೆ. ನಿನ್ನತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯವಿಲ್ಲ. ಏಕೆಂದರೆ ಇಲ್ಲಿ ಯಾರಿಗೂ ಯಾರೂ ಅನಿವಾರ್ಯರಲ್ಲ. ಸ್ವಲ್ಪ ಜನ ನಿಮ್ಮನ್ನು ಇಷ್ಟ ಪಡುತ್ತಾರೆ. ಸ್ವಲ್ಪ ಜನ ಇಷ್ಟ ಪಟ್ಟಂತೆ ನಟಿಸ್ತಾರೆ. ಇನ್ನು ಸ್ವಲ್ಪ ಜನ  ತಮ್ಮ ಅವ...

ಒಳ್ಳೆಯದು ಮಾತಾಡಿದರೆ ನಾಟಕ ಇವನದು ಅಂತಾರೆ,

Image
  ಒಳ್ಳೆಯದು ಮಾತಾಡಿದರೆ ನಾಟಕ ಇವನದು ಅಂತಾರೆ ,  ಕೆಟ್ಟದು ಮಾತಾಡಿದರೆ ದುಷ್ಟ ಇವನು ಅಂತಾರೆ , ಉಪದೇಶ ಹೇಳಿದರೆ ಬರೀ ಸುಳ್ಳು ಅಂತಾರೆ ಸುಮ್ಮನಿದ್ದರೆ ಸ್ವಾರ್ಥಿ ಅಂತಾರೆ .  ನಾವು ಹೇಗಿದ್ದರೂ ಜನ ನಂಬಲ್ಲ . ನಮ್ಮ ಆತ್ಮ ಸಾಕ್ಷಿ ನಂಬುವಂತೆ ನವಿದ್ದರೆ ಸಾಕು .  ಆತ್ಮಸಾಕ್ಷಿಯಂತೆ ನಡೆದರೂ ಎಡವಿಬೀಳೋದು ಸಹಜ . ಮನುಷ್ಯನಿಗೆ ಗಾಯವಾಗದಿದ್ದರೆ ದರ್ಯಾ ಬರೋದಿಲ್ಲ , ತಪ್ಪು ಮಾಡದೇ ಇದ್ದರೆ ಕಲಿಯುವುದಿಲ್ಲ , ಸೋಲದಿದ್ದರೆ ಗೆಲ್ಲುವುದಿಲ್ಲ . ಯಾವುದಕ್ಕೂ ನಾವು ಉತ್ಸಾಹ ಕಳೆದುಕೊಳ್ಳಬಾರದು .  ಹಾಗಿದ್ದರೆ ನಾವು ಮಾಡಬೇಕಾದುದು ಏನು ?  ನಾವು ಮೌನವಾಗಿದ್ದಷ್ಟು ನಮಗೆ ಒಳ್ಳೇದು . ನಮ್ಮನ್ನು ಯಾರೇ ನಿಂದಿಸಲಿ , ದ್ವೇಷಿಸಲಿ ಅಥವಾ ನಮ್ಮ ವಿರುದ್ಧ ಪಿತೂರಿ ಮಾಡಲಿ ಹಠ ಸಾಧಿಸಲಿ ನಾವು ಮೌನವಾಗಿರುವುದೇ ಉತ್ತಮ .  ಒಂದೊಮ್ಮೆ ನಾವು ಅವುಗಳಿಗೆ ಪ್ರತಿಕ್ರಿಯೆ ನೀಡಲು ಹೊರಟರೆ ಅದರಿಂದ ಅನಾಹುತಗಳೇ ಹೆಚ್ಚು . ನಾವೆಷ್ಟೇ ಬೇಡ ಅಂದರೂ ಈ ಸಮಾಜದಲ್ಲಿ ಬದುಕಲೇ ಬೇಕು . ಕೆಲವರು ನಗಿಸ್ತಾರೆ ಕೆಲವರು ಅಳಿಸ್ತಾರೆ. ಕೆಲವರು ಆಶೀರ್ವಾದ ಮಾಡತಾರೆ ಇನ್ನು ಕೆಲವರು ಪಾಠ ಕಳಿಸ್ತಾರೆ . ನಾವು ಎಲ್ಲರನ್ನು ಎಲ್ಲವನ್ನು ಸಮಾಧಾನವಾಗಿ ಸ್ವೀಕರಿಸಬೇಕು . ಯಾರ ಜೊತೆ ಎಷ್ಟರಮಟ್ಟಿಗೆ ಇರಬೇಕು ಅಷ್ಟರ ಮಟ್ಟಿಗೆ ಮಾ...

ಜೀವನದಲ್ಲಿ ಗೆಲುವು ಸಾದಿಸಲು ಬೇಕಾಗಿರುವುದು-ಬೇಕಾಗಿರೋದು ಧೃಡ ಸಂಕಲ್ಪ.

Image
  ಜೀವನದಲ್ಲಿ ಗೆಲುವು ಸಾದಿಸಲು ಬೇಕಾಗಿರುವುದು ಕೇವಲ ದೊಡ್ಡ ದೊಡ್ಡ ಡೈಲಾಗು ಗಳಲ್ಲ .......... ಬೇಕಾಗಿರೋದು ಧೃಡ ಸಂಕಲ್ಪ . ವರ್ತಮಾನದಲ್ಲಿ ನೀವು ಗೆದ್ದಿದ್ದೀರೋ ಅಥವಾ ಸೋತಿದ್ದಿರೋ ಅನ್ನೋದು ಇಂದಿನ   ಸಂಕಲ್ಪಕ್ಕೆ ಯಾವುದೇ ಅಡೆ ತಡೆ ತರದು .   ಅಡೆ ತಡೆ ಏನಾದ್ರು ಇದ್ರೆ ಅದು ನಿಮ್ಮ ಇಂದಿನ ಅಭ್ಯಾಸಗಳು . ಇಂದಿನ ನಿಮ್ಮ   ಅಭ್ಯಾಸಗಳಿಂದಲೇ ಲೆಕ್ಕ ಹಾಕಬಹುದು ನೀವು ಗೆಲುವಿನ ಕಡೆಗೆ ಸಾಗುತಿದ್ದೀರಾ   ಅಥವಾ ಸೋಲಿನ ಕಡೆಗೆ ......            "  ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು"  ಈ ಮಾತಿನಂತೆ ನಮ್ಮಲ್ಲಿರುವ                                       ನಿರಂತರ ಪರಿಶ್ರಮದ ಕೊರತೆ ನಮ್ಮನ್ನು ಗುರಿಯನ್ನು ತಲುಪಲು ತಡೆಯಾಗುವದು ಗ್ಯಾರಂಟಿ   ಪ್ರತೀ ವರ್ಷದ ಮೊದಲ ದಿನ ನಾವು ಬಹಳಷ್ಟು ಸಂಕಲ್ಪಗಳನ್ನು ಮಾಡಿರ್ತಿವಿ .   ಆದರೆ ಅವುಗಳನ್ನು ಅಷ್ಟೇ ವೇಗವಾಗಿ ಮರೆತುಬಿಡ್ತಿವಿ.   ಇದಕ್ಕೆ ಕಾರಣ?   ಕಾರಣ ಸಂಕಲ್ಪ ಹಾಗು ಗುರಿ ನಮ್ಮಲ್ಲಿ ನಿರ್ದಾರ ಆಗಿರುತ್ತೆ. ಆದರೆ ಗುರಿ ತಲುಪಲು   ಒಂದು ನಿರ್ದೇಶನ ಅಥವಾ ಮಾದರಿ ಅಂತ ಇರಬ...